ಸದಾ ಬ್ರಹ್ಮವಿಚಾರಿ
ಏಕ ಜನಿವಾರಧಾರಿ
ಕೆಲವೊಮ್ಮೆ ಮಾತ್ರ ಶನಿವಾರ
ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ
ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ
ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ
ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ
ಒತ್ತಾಯ ಮಾಡಿದರೆ ಒಂದೇ ಬೀಡಿ
ಕಾಡಿ ಬೇಡಿದರೆ ಜೂಜು ಸೋಡಾ ಕೂಡಿ ಅಷ್ಟೆ
ಮಾತ್ರ ಕಟ್ಟಾ ಬ್ರಹ್ಮಚಾರಿ
ವ್ಯಭಿಚಾರಿ
ಎಂದರೆ ಅಥವಾ ಹೆಣ್ಣು ಎಂದರೆ
ಅವರ ನೆರಳೆಂದರೆ ಅಷ್ಟಕ್ಕೆ ಬಂದರೆ
ಹರದಾರಿ ದೂರ ಸರಿ
ಕೆಲವೊಮ್ಮೆ ಹಿಂದೆ ಕೆಲವೊಮ್ಮೆ ಮುಂದೆ
ಸರ್ವದಾ ಪಾರಮಾರ್ಧಿಕ ವಿಚಾರಿ
ಹಗಲೂ ರಾತ್ರಿ ಒಂದೇ
ಧ್ಯಾನ ಕೊಕ್ಕರೆಯಂತೆ
ಸಕ್ಕರೆಯಿಲ್ಲದೆಯೆ ಕಾಫಿ ಕುಡಿದು ಸಕ್ಕರೆಯದೇ ನೆನಪಾಗಿ
ತುಟಿ ಚಪ್ಚರಿಸಿ-ಈ ಶುದ್ಧ ಅಚುಂಬಿತ ತುಟಿಗಳಯ್ಯಾ
ಮಂತ್ರ ತಂತ್ರಗಳೆಂದು ಪರಧ್ಯಾನದಲ್ಲಿ ಪುಟಿಪುಟಿವ ತುಟಿ
ಯಾರ ಕೆಳತುಟಿಗಳದ್ದೂ ಜೊಲ್ಲು ನೆಕ್ಕದ ಬ್ರಹ್ಮಚಾರಿ ತುಟಿ
ನಗದ ನಗಲಾರದ ತುಟಿ-ಎಲ್ಲಾ ತುಟ್ಟಿ ಕಳ್ಳಭಟ್ಟಿಯ ಹಾಗೆ
ಅಹಹ ಹೇಗೆ ವಿವರಿಸಲಿ ಹೇಗೆ ಹೇಳಲಿ
ಈ ಅವಸ್ಥೆ ಛೇ ಛೇ
*****
Related Post
ಸಣ್ಣ ಕತೆ
-
ಮಂಜುಳ ಗಾನ
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…